Slide
Slide
Slide
previous arrow
next arrow

ಸೆಲ್ಕೋ ಸಿಇಒ ಮೋಹನ್ ಹೆಗಡೆಗೆ ‘ಜೀವನ ಭಾಸ್ಕರ’ ಬಿರುದು

300x250 AD

ಕುಮಟಾ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ‌ರುವ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಸಂಸ್ಥೆಯು ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರಿಗೆ ‘ಜೀವನ ಭಾಸ್ಕರ’ ಎಂಬ ಬಿರುದು ನೀಡಿ ಅಭಿನಂದಿಸಲು ತೀರ್ಮಾನಿಸಿದೆ.

ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ, ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ‌ ಮಹಾ ಸ್ವಾಮೀಜಿಗಳು ಮೋಹನ ಹೆಗಡೆ ಅವರಿಗೆ ಬಿರುದು ನೀಡಿ ಗೌರವಿಸಲಿದ್ದಾರೆ. ನಾಟ್ಯ ಶ್ರೀ ಸಂಸ್ಥೆ‌ ೯ ದಿನಗಳ‌ ಕಾಲ ಭಟ್ಕಳ, ಹೊನ್ನಾವರ, ಕುಮಟಾ ತಾಲೂಕಿ‌ನ ವಿವಿಧಡೆ ಹಮ್ಮಿಕೊಂಡ ಭಾವಾ ಭಾಷಾ ವಿಲಾಸ ಸರಣಿ ಶ್ರೀರಾಮನ ಕುರಿತಾದ ತಾಳಮದ್ದಲೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಅಷ್ಟೂ ದಿನ ಶ್ರೀರಾಮನ ಪಾತ್ರ ಮಾಡಲಿರುವ ಮೋಹನ ಭಾಸ್ಕರ ಹೆಗಡೆ ಅವರನ್ನು ಗೌರವಿಸುತ್ತಿರುವದು ನಮಗೂ ಸಂತಸದ ಸಂಗತಿ‌. ಪ್ರತಿ ತಾಳಮದ್ದಲೆಯಲ್ಲೂ ಆಯಾ ಭಾಗದ ಸಾಧಕರನ್ನು‌‌ ಕೂಡ ಸಂಸ್ಥೆ ಅಭಿನಂದಿಸುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top